Sunday, October 13, 2019

ತುಣುಕು~ಮಿಣುಕು


ತುಣುಕು~ಮಿಣುಕು

ನಾನು ಕಥಾಗುಚ್ಛದ ಓದುಗರಲ್ಲಿ ಒಬ್ಬಳು. ಇವತ್ತಿನ 'ತುಣುಕು~ಮಿಣುಕು' ಬರಹ ನನ್ನಲ್ಲಿ ನಗೆ ಬುಗ್ಗೆಯನ್ನೇ ಹುಟ್ಟಿಹಾಕಿದೆ. ಪ್ರೇರಿತಳಾಗಿ ನಾನು ಬರೆದಿರುವೆ.
ನಮ್ಮ ಅಮ್ಮ ಮನೆಯಲ್ಲಿ ಚಪ್ಪರದವರೆಕಾಯಿ ಬಳ್ಳಿ ಹಬ್ಬಿಸಿದ್ದರು. ಮೊದ-ಮೊದಲು ಕಾಯಿ ಕೀಳಲು, ಹಚ್ಚಿಕೊಡಲು ಬಲು ಉತ್ಸಾಹ.. ನಾನು ನನ್ನ ತಮ್ಮ ನಾ ಮೊದಲು ನಾ ಮೊದಲು ಅಂತ ಗಲಾಟೆ ಮಾಡಿ ಕೇಳ್ತಾ ಇದ್ದ್ವಿ. ಈ ಉತ್ಸಾಹ ಬಲು ದಿನ ಇರಲಿಲ್ಲ. ಅಮ್ಮ ಮೂರು ಹೊತ್ತು ಚಪ್ಪರದವರೆಯ ಉತ್ತರ ಕರ್ನಾಟಕ ತರಹ ಪಲ್ಯ, ಕೂಟು, ಹುಳಿ, ನಾರ್ಥ್-ಇಂಡಿಯನ್ ಕರಿ ಅಂತ ತರಾವರಿ ಮಾಡ್ತಾ ಇದ್ದರು. ನಮಗೋ ಸಾಕಾಗಿ ಹೋಗಿತ್ತು. ಅಮ್ಮ ಅವತ್ತು ಸಾಯಂಕಾಲ ಅವರ ಗೆಳತಿಗೆ ಮನೆಯಲ್ಲಿ ಬೆಳೆದ ಚಪ್ಪದವರೇ ತೊಗೊಳ್ಳಿ ಅಂತ ಕೊಟ್ಟರು. ಹೊಳೀತು ನೋಡಿ ನಮಗೆ ಭಯಂಕರ ಐಡಿಯಾ! ದಿನಾ ಸಾಯಂಕಾಲ ಟೆರೇಸ್ ಮೇಲೆ ಹೋಗು ಮನೆ ಮುಂದೆ ಯಾರೇ ಸ್ವಲ್ಪ ಗುರುತಿರುವರು ಹೋಗ್ತಾ ಇದ್ದರು... ಆಂಟಿ ಹೇಗಿದ್ದೀರಾ? ಮನೆಗೆ ಬಂದು ತುಂಬಾ ದಿನ ಆಗಿದೆ. ಅಮ್ಮ ಇದ್ದಾರೆ ಬನ್ನಿ ಅಂತ ಬಲವಂತ ಮಾಡಿ ಕರೆದುಕೊಂಡು ಬರ್ತಾ ಇದ್ವಿ. ಆಮೇಲೆ ಮೇಲೆ ಬೆಳೆದ ತರಕಾರಿ ತೊಗೊಳ್ಳಿ ಅಂತ ಒಂದು ಕವರ್ ನಾವೇ ಕೊಡ್ತಾ ಇದ್ವಿ. ಅಮ್ಮನಿಗೆ ಹೀಗೂ ಮನೆಯಲ್ಲಿ ತುಂಬಾ ಇದೆಯಲ್ಲವೆ ಅಂತ ಹೇಳ್ತಾ ಇದ್ವಿ. ೨-೩ ದಿನ ಅಮ್ಮನಿಗೆ ಗೊತ್ತಾಗಲಿಲ್ಲ.. ೪ ನೇ ದಿನ ಒಟ್ಟಿಗೆ ಇಬ್ಬರಿಬ್ಬರು ಆಂಟಿನ ಕರೆದುಕೊಂಡು ಬಂದೆ. ಅವರಿಗೆ ಕೊಟ್ಟು ಕಳಿಸ್ತಾ ಇರಬೇಕಾದ್ರೆ ನಂ ತಮ್ಮ ಇನ್ನೊಬ್ಬ ಆಂಟಿನ ಕರೆದುಕೊಂಡು ಬಂಡ.. ಇವರಿಗೂ ಒಂದು ಕವರ್ ಕೊಡೆ ಅಕ್ಕ ಅಂತ ಹೇಳಿದ. ಅಷ್ಟು ಹೊತ್ತಿಗೆ ಅಮ್ಮನಿಗೆ ಗೊತ್ತಾಯಿತು. ಆಮೇಲೆ ಇತ್ತು ನಮಗೆ ಒಳ್ಳೆ ಕ್ಲಾಸ್ :-)

ಈಗಲೂ ನೆನಸಿಕೊಂಡರೆ, ಅಮ್ಮ ಮನೆಯಲ್ಲಿ ಚಪ್ಪರದವರೇ ಬೆಳೆಸಬೇಡ ಅಂತ ಹೇಳ್ತಿವಿ.